ಇತ್ತೀಚೆಗಷ್ಟೇ ಧ್ವನಿ ಸುರುಳಿ ಬಿಡುಗಡೆ ಮಾಡಿಕೊಂಡ ‘ಜಿಂಕೆಮರಿ’ ಚಿತ್ರತಂಡ ಕುಂದಾನಗರ ಬೆಳಗಾವಿಯಲ್ಲಿ ಚಿತ್ರದ ಹಾಡುಗಳ ಸವಿರುಚಿಯನ್ನು ೪೦೦೦ಕ್ಕೂ ಹೆಚ್ಚು ಪ್ರೇಕ್ಷಕರ ಮುಂದೆ ಪ್ರದರ್ಶನಮಾಡಿದೆ. ಚಿತ್ರದ ಎರಡು ಹಾಡುಗಾಳಿಗಂತೂ ಪ್ರೇಕ್ಷಕಸ್ರೆ ಕುಣಿದು ಕುಪ್ಪಳಿಸಿದ್ದು ಕಳೆದ ಭಾನುವಾರ ಅಂದರೆ ಏಪ್ರಿಲ್ ೧೪ ರ ಸಂಜೆ.
ಬೆಳಗಾವಿಯ ತಿಲಕವಾಡಿ ಅಲ್ಲಿ ಇರುವ ಮಿಲೇನಿಯಂ ಗಾರ್ಡನ್ ಅಲ್ಲಿ ಕಳೆದ ಭಾನುವಾರ ಸಂಜೆ ಮೊದಲು ಶ್ರೇಷ್ಠ ಗಾಯಕ ಪಿ ಬಿ ಶ್ರೀನಿವಾಸ್ ಅವರ ಆಗಳಿಕೆಗೆ ಮೊದಲು ಶ್ರದ್ದಾಂಜಲಿಯನ್ನು ಅರ್ಪಿಸಿ ನಂತರ ‘ಜಿಂಕೆಮರಿ’ ಚಿತ್ರದ ಪ್ರಚಾರಕ್ಕಾಗಿ ಮೂರು ತಾಸುಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
‘ಜಿಂಕೆಮರಿ’ ಚಿತ್ರದ ನಿರ್ಮಾಪಕರಾದ ಮಹೇಶ್ ಬಾಳೆಕುಂದ್ರಿ ಅವರು ಕಾರ್ಯಕ್ರಮದ ವಿವರಣೆಯನ್ನು ನೀಡುತ್ತಾ ಈ ಮೂರು ತಾಸುಗಲಲ್ಲಿ ಐದು ಹಾಡುಗಳಿಗೆ ನೃತ್ಯ ಪ್ರದರ್ಶನ ಏರ್ಪಾಡು ಆಗಿತ್ತು ಅಲ್ಲದೆ ಇಡೀ ಕಾರ್ಯಕ್ರಮವನ್ನು ಎರಡು ಎಲ್ ಸಿ ಡಿ ಟಿ ವಿಗಳಲ್ಲಿ ಮನರಂಜೆನ್ಯನ್ನು ಅಣುವು ಮಾಡಿಕೊಡಲಾಗಿತ್ತು ಎಂದರು.
ನಿರ್ಮಾಪಕ ಮಹೇಶ್ ಬಾಳೆಕುಂದ್ರಿ ಅವರ ತಾಯಿ, ಮಡದಿ, ಚಿತ್ರದ ನಿರ್ದೇಶಕ ನವೀನ್ ಕುಮಾರ್, ನಾಯಕ ಯೋಗೀಶ್ ನಾಯಕಿ ಸೋನಿಯ ಗೌಡ ಅಂದು ಪಾಲ್ಗೊಂಡಿದ್ದರು. ಪ್ರೇಕ್ಷಕರ ಒತ್ತಾಯದ ಮೇರೆಗೆ ಚಿತ್ರದ ನಾಯಕಿ ಹಾಗೂ ನಾಯಕಿ ಎರಡು ಹಾಡುಗಳಿಗೆ ಹೆಜ್ಜೆ ಹಾಕಿದರು. ಬಾಳೆಕುಂದ್ರಿ ಅವರು ಮರುಭೂಮಿಯಾಗಿದೆ ನಿನ್ನ ಮನಸ್ಸು.... ಎಂಬ ಗೀತೆಯನ್ನು ಸಹ ಚಿತ್ರಕ್ಕೆ ಹಾಡಿದ್ದಾರೆ. ಆದರೆ ಅಂದು ಅವರು ಗಾಯಕ ಶಾನ್ ಹೇಳಿರುವ ಹಾಡನ್ನು ಹೇಳಿದರು. ಹಾಡು ಕುಣಿತದ ಮಧ್ಯೆ ರಿತೆಶ್ ಅವರ ಹಾಸ್ಯಕಾರ್ಯಕ್ರಮವಿತ್ತು.‘ಜಿಂಕೆಮರಿ’ ಚಿತ್ರದ ತುಣುಕುಗಳನ್ನು ಹಾಡುಗಳ ಮಧ್ಯೆ ಪ್ರದರ್ಶಿಸಲಾಯಿತು.
ಸಾಯಿಕಾರ್ತಿಕ್ ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿರುವರು. ಎಂಟು ವರ್ಷಗಳಿಂದ ಸಹಾಯಕ ನಿರ್ದೇಶಕರಗಿ ದುಡಿದಿರುವ ನವೀನ್ ಕುಮಾರ್ ಈ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ವೀನಸ್ ಮೂರ್ತಿ ಈ ಚಿತ್ರದ ಛಾಯಾಗ್ರಾಹಕರು.
ಯೋಗೇಶ್, ಸೋನಿಯ ಗೌಡ ಜೊತೆಯಲ್ಲಿ ಅವಿನಾಷ್, ಶರತ್ ಲೋಹಿತಾಶ್ವ, ಶೋಬಾರಾಜ್, ರಮೇಶ್ ಭಟ್, ಜೈ ಜಗದೀಶ್, ಹರೀಶ್ ರಾಯ್, ಅಚ್ಯುತ್ ಕುಮಾರ್, ಶಾರದಮ್ಮ, ವಿಜಯ್ ಕೌಂಡಿನ್ಯ, ನಿನಸಮ್ ಅಶ್ವಥ್, ಹರೀಶ್ ರಾಜ್, ಬುಲ್ಲೆಟ್ ಪ್ರಕಾಷ್, ಮುನಿ, ಋತು ಹಾಗೂ ಇನ್ನಿತರರು ಇದ್ದಾರೆ.